-ಕವನ-
ತಂದೆ ವಾಲ್ಮೀಕಿ ಧನ್ಯೆ ಜಾನಕಿ!
ಆದಿಕವಿ
ಭಾರತದ ವಾಲ್ಮೀಕಿ
ಜನಕನ ಮಗಳು
ಜಾನಕಿ
ಅವನ ಪ್ರೀತಿಯ ಕಾವ್ಯಕ್ಕೆ
ಕಥಾ ನಾಯಕಿ!
ಜಾನಕಿ ಪತಿ ಶ್ರೀರಾಮನ ಉದಾಹರಣೆ ಇಲ್ಲಿದೆ
ಅದಕ್ಕೊಂದು ಹೆಸರು ಮೂಡಿದೆ ಅದೇ ರಾಮಾಯಣ!
ಅವನೊಬ್ಬ ಲಂಕಾ ರಾವಣ
ಅವನಿಂದ
ಜಾನಕಿಯ ಅಪಹರಣ!
ಹೋರಾಟ ನಡೆಸಿ
ಆಕೆಯ ಬಿಡಿಸಿ
ಹೀಗೆ ವನವಾಸ
ಹಾಗೆ ಅಜ್ಞಾತವಾಸ
ಎಲ್ಲಾ ಮುಗಿಸಿ..
ಗರ್ಭಿಣಿ ಜಾನಕಿ ಮತ್ತೆ ಕಾಡಿಗೆ
ಹೀಗೆ ಹೃದಯಕ್ಕೆ ಸಂಬಂಧಿಸಿದೆ ಇದು ಓದಿಗೆ!
ವಾಲ್ಮೀಕಿ ಆಶ್ರಯದಲ್ಲಿ ಅವಳಿಗೆ ನೋವಿನ ಹೆರಿಗೆ
ಜನನಿ ಜಾನಕಿ ಮತ್ತೆ ಮತ್ತೆ ಹೀಗೆ ಜಾನಕಿ.. ಬರವಣಿಗೆಗೆ!
ಹಾಗೆ ಮಹಾಕಾವ್ಯ ರಾಮಾಯಣ
ಒಂದು ಸಾಂಸಾರಿಕ ಬದುಕಿನ ಪಯಣದ ಅನಾವರಣ!
ಇಂದು ಕವಿ ಗೌರವದ ವಾಲ್ಮೀಕಿ ಜಯಂತಿ ಆಚರಣೆ
ಈ ಕಾವ್ಯ ಓದಿದವರು ಕೆಲವೇ ಜನ ಮಾತ್ರವಿಲ್ಲಿ ಜಾಣೆ!
ಆದರೆ ಅವರ ಮಾತುಕತೆ ಭಾಷಣ
ಒಬ್ಬೊಬ್ಬರದು ಒಂದೊಂದು ವಿಮರ್ಶೆಯ ನವಬಾಣ!
"ವಾಲ್ಮೀಕಿ ಹಾಗಂತೆ ಹೀಗಂತೆ..."
ಅವೆಲ್ಲ ಈಗ ಯಾಕಂತೆ!?
'ವಾಲ್ಮೀಕಿ ಒಬ್ಬ ಕವಿ' ನಮಗಿಷ್ಟೇ ಈಗ ಸಾಕಂತೆ.
ಉಳಿದಂತೆ...
ನಾವೆಲ್ಲಾ 'ರಾಮಾಯಣ' ಕಾವ್ಯ ಓದಿ ತಿಳಿದಂತೆ
ವಾಲ್ಮೀಕಿ ಪ್ರಾಣಭಾವಕ್ಕೂ ತುಂಬಾ ಖುಷಿಯಂತೆ!
ಹೀಗೆ ಸಾಹಿತ್ಯ ಚರಿತ್ರೆಯಲ್ಲಿ ಆತ
ನಮ್ಮ ಕವಿಗಳ ಮುತ್ತಾತ..
ಮತ್ತೇ?
ಜವಾಬ್ದಾರಿ ತಂದೆ,ಧನ್ಯಳು ಆ ಸೀತೆ!
-ರಚನೆ: ಡಾ.ಸಂಪತ್ ಬೆಟ್ಟಗೆರೆ

No comments:
Post a Comment